Friday, 6 March 2026

ಮೂಡಿಗೆರೆ : ಯು. ಹೊಸಹಳ್ಳಿ ಶ್ರೀ ಗುಡ್ಡದ ಭೈರವೇಶ್ವರ ಅಷ್ಠಬಂಧ ಬ್ರಹ್ಮ ಕಲಶೋತ್ಸವ

ಮೂಡಿಗೆರೆ ತಾಲ್ಲೂಕು ಯು. ಹೊಸಹಳ್ಳಿ ಗ್ರಾಮದ ಶ್ರೀ ಗುಡ್ಡದ ಭೈರವೇಶ್ವರ ಹಾಗೂ ಉಪದೇವತೆಗಳ ಅಷ್ಠಬಂಧ ಬ್ರಹ್ಮ ಕಲಶೋತ್ಸವ  ಕಾರ್ಯಕ್ರಮ  ಮಾರ್ಚ್ 4 ಮತ್ತು 5 ರಂದು ವಿಜೃಂಭಣೆಯಿಂದ ನೆರವೇರಿತು.

ಮಾರ್ಚ್ 4 ರಂದು ಬುಧವಾರ ಸಂಜೆ 5-30 ರಿಂದ ಆಲಯ ಪರಿಗ್ರಹ, ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ದಿಕ್ಷಾಲಕಬಲಿ, ರಕ್ಷೆ, ಪ್ರಸಾದ ವಿನಿಯೋಗ ನೆರವೇರಿತು.

 ದಿನಾಂಕ : 05-03-2026ನೇ ಗುರುವಾರ ಗಣಯಾಗ, ಪ್ರತಿಷ್ಠಾಯಾಗ, ಬ್ರಹ್ಮಕಲಶ ಪೂಜೆ, ದೇವರಿಗೆ ಅಷ್ಠಬಂಧ ಲೇಪನದ ನಂತರ ಬೆಳಿಗ್ಗೆ 11-35 ವೃಷಭ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ,   ಪ್ರಸಾದ ವಿನಿಯೋಗ ನೆರವೇರಿತು.

ಎಲ್ಲಾ ಕಾರ್ಯಗಳು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರು ಇವರ ನೇತೃದಲ್ಲಿ ನೆರವೇರಿಸಲಾಯಿತು.

 ಯು.ಹೊಸಹಳ್ಳಿ ಹಾಗೂ ಊರುಬಗೆ ಸಾವಿರದ ಹದಿಮೂರು ಗ್ರಾಮದ ಗ್ರಾಮಸ್ಥರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಂದಿ ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದರು.

ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.

 

No comments:

Post a Comment