ಚಿಕ್ಕಮಗಳೂರು ತಾಲ್ಲೂಕು ಆವತಿ ಹೋಬಳಿ ಮಲ್ಲಂದೂರು ಬ್ಯಾರವಳ್ಳಿ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಕಡಗಲುನಾಡು ಶ್ರೀ ಮಳಲೂರಮ್ಮ ದೇವಿ ದಿವ್ಯ ರಥೋತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.
ದಿನಾಂಕ
5.3.2026 ಗುರುವಾರದಂದು ಪ್ರಾರಂಭವಾದ ದಿವ್ಯ ರಥೋತ್ಸವದಲ್ಲಿ
ಮೊದಲನೆಯ ದಿನ ದೇವಿಗೆ ಪಂಚಾಮೃತ ಅಭಿಷೇಕ, ಕಲಶ ಸ್ಥಾಪನೆ,ಉಡುಗೆ ಅಲಂಕಾರ, ವಿಶೇಷ ಪೂಜೆ ಮಹಾಮಂಗಳಾರತಿ,
ರಾತ್ರಿ ಸಣ್ಣ ತೇರು ಉತ್ಸವ ನಡೆಯಿತು.
ಶುಕ್ರವಾರ
ಮಹಾಪೂಜೆ ಮಹಾಮಂಗಳಾರತಿ ಹರಕೆ ಕಾಣಿಕೆ ಒಪ್ಪಿಸುವುದು, ಪ್ರಾರ್ಥನೆ,ಮಡಿಲಕ್ಕಿ ಸೇವೆ, ಹಣ್ಣು ಕಾಯಿಸೇವೆ,
ಕುಂಕುಮಾರ್ಚನೆ,ಪ್ರಸಾದ ವಿನಿಯೋಗ, ಶನಿವಾರ
ದಿವ್ಯ ರಥೋತ್ಸವ
,ಕಡಗಲು ನಾಡು ಗ್ರಾಮಸ್ಥರಿಂದ ಆಯೋಜಿಸಲಾಗಿತ್ತು.ವಿಶೇಷ ಪ್ರಾರ್ಥನೆ ತೀರ್ಥ ಪ್ರಸಾದ ಅನ್ನಸಂತರ್ಪಣೆ
ಮಹಾಮಂಗಳಾರತಿ ನಡೆಯಿತು ಕೊನೆಯ ದಿನವಾದ ಭಾನುವಾರ ಓಕುಳಿ ಪೂಜಾ ಕಾರ್ಯಕ್ರಮ ಮಹಾಮಂಗಳಾರತಿ, ಪ್ರಾರ್ಥನೆ
,ತೀರ್ಥ ಪ್ರಸಾದ ವಿನಿಯೋಗ, ಹಣ್ಣು ಕಾಯಿಸೇವೆ, ಪೂರ್ಣಗೊಂಡಿತು.
ಹೋಬಳಿಯ ಸುತ್ತಮುತ್ತಲಿನ ಹಲವು ಗ್ರಾಮ ಮತ್ತು ಹಳ್ಳಿಗಳಿಂದ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

No comments:
Post a Comment