Monday, 9 March 2026

ಮೂಡಿಗೆರೆ : ಬಾನಹಳ್ಳಿಯ ಸರ್ಕಾರಿ ಶಾಲೆಗೆ ಅತ್ಯುತ್ತಮ ಎಸ್ ಡಿಎಂಸಿ ಪ್ರಶಸ್ತಿ


 ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯು ರಾಜ್ಯಮಟ್ಟದ  ಅತ್ತ್ಯುತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ಗಳಿಸಿದೆ.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಆರ್.ಪ್ರಕಾಶ್ ಮಾಹಿತಿ ನೀಡಿ ಮಾತನಾಡಿ 'ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ಮಟ್ಟದ ಉತ್ತಮ ಎಸ್ ಡಿಎಂಸಿ ಪುಷ್ಟಿಯಾಗಿ ಆಯ್ಕೆಯಾಗಿದೆ.ಎಸ್ ಡಿಎಂಸಿ ಪುಷ್ಟಿ ಕಾರ್ಯಕ್ರಮಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.ಒಟ್ಟು ಒಂಬತ್ತು ಶಾಲೆಗಳು ಪುಷ್ಟಿ ಕಾರ್ಯಕ್ರಮದಲ್ಲಿ ಆಯ್ಕೆಯಾಗಿದ್ದು ಅದರಲ್ಲಿ ಬಾನಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.ಒಂಬತ್ತು ಶಾಲೆಗಳಿಗೆ ತಾಲ್ಲೂಕು ಹಾಗೂ ಜಿಲ್ಲೆಯಿಂದ ರಾಜ್ಯ ಹಂತದಲ್ಲಿ ಮೂರು ರೀತಿಯ ಸಮಿತಿಗಳು ಶಾಲೆಗೆ ಭೇಟಿ ನೀಡಿ ತಪಾಸಣೆ ನಡೆಸಿ ರಾಜ್ಯ ಮಟ್ಟಕ್ಕೆ ವರದಿ ನೀಡಿದ್ದು ಬಾರಿ ಅತ್ತ್ಯುತ್ತಮ ಎಸ್ ಡಿಎಂಸಿ ಪುಷ್ಟಿಗೆ ಆಯ್ಕೆಯಾಗಿರುತ್ತದೆ.ಅಲ್ಲದೇ ಶಾಲೆಯ ಶಿಕ್ಷಕಿ ಇಂಪಾ ಸವಿನ್ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯು ಕೂಡ ಲಭಿಸಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ' ಎಂದರು. ಶಾಲಾ ಸಮಿತಿಯ ಅಧ್ಯಕ್ಷ ದಿನೇಂದ್ರ ಮಾತನಾಡಿ' ಶಾಲೆಯ ಸಮಿತಿಯ ಸದಸ್ಯರು,ಪೋಷಕರು  ಒಗ್ಗಟ್ಟಾಗಿ ಶಾಲೆಯ ಅಭಿವೃದ್ದಿಗಾಗಿ ಶ್ರಮಿಸಿರುವುದರಿಂದ ಶಾಲೆಗೆ ಪ್ರಶಸ್ತಿ ದೊರೆತಿದೆ.ಶಿಕ್ಷಕವೃಂದ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇವೆ'ಎಂದರು.

ಸಂದರ್ಭದಲ್ಲಿ ಶಾಲೆಯ ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಆರ್.ಶ್ರೀಧರ್,ಮಾಜಿ ಉಪಾಧ್ಯಕ್ಷೆ ಅಮಿತಾ,ಪ್ರಸ್ತುತ ಉಪಾಧ್ಯಕ್ಷೆ ತೇಜಸ್ವಿನಿ ಪ್ರಸಾದ್,ಸವಿನ್ ಕುಮಾರ್,ರವಿ ಮತ್ತಿತರರು ಇದ್ದರು.

No comments:

Post a Comment