Thursday, 5 March 2026

ಮೀನುಗಾರಿಕಾ ವಿಜ್ಞಾನ ಪದವಿಯಲ್ಲಿ ಮೂಡಿಗೆರೆಯ ಕುಮಾರಿ ಖುಷಿ ಅವರಿಗೆ ಚಿನ್ನದ ಪದಕ

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇಲ್ಲಿನ ಮೀನುಗಾರಿಕಾ ವಿಜ್ಞಾನ ಪದವಿಯಲ್ಲಿ ಮೂಡಿಗೆರೆ ಕುಮಾರಿ ಖುಷಿ ಇವರು ಚಿನ್ನದ ಪದಕ ಪಡೆದಿದ್ದಾರೆ.

ವಿಶ್ವವಿದ್ಯಾಲಯದ 2024-25ನೇ ಸಾಲಿನ ಮೀನುಗಾರಿಕೆ ವಿಜ್ಞಾನದ (ಬಿ.ಎಫ್.ಎಸ್ಸಿ) ಸ್ನಾತಕ ಪದವಿಯಲ್ಲಿ ಹೆಚ್ಚಿನ ಗುಣಾಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ ಖುಷಿಯವರಿಗೆ ಡಾ. ಕೆ.ವಿ. ದೇವರಾಜ ಚಿನ್ನದ ಪದಕವನ್ನು ದಿನಾಂಕ : 27-2-2026ರಂದು ನಡೆದ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವದ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದ್ದಾರೆ.

ಖುಷಿಯವರು ಮೂಡಿಗೆರೆ ಪಟ್ಟಣದ ಛತ್ರಮೈದಾನದ ನವೀನ್ (ಮೂಡಿಗೆರೆ ಟಿಎಪಿಸಿಎಂಎಸ್ ನಿವೃತ್ತ ನೌಕರ) ಹಾಗೂ ಶ್ರೀಮತಿ ಮೀನಾ ಅವರ ಪ್ರಥಮ ಪುತ್ರಿ.  ತಮ್ಮ ಪುತ್ರಿಯ ಸಾಧನೆಗೆ ಪೋಷಕರು ಹಾಗೂ ಬಂಧುಗಳು ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.

No comments:

Post a Comment